spot_img
spot_img

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗೆ ಬಳಸಿದ ಎಸ್​​ಸಿ – ಎಸ್​ಟಿ ಹಣ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಂಪನ್ಮೂಲ ಕ್ರೋಢೀಕರಣದ ಕಸರತ್ತು ನಡೆಸುತ್ತಿದೆ. ಈ ಯೋಜನೆಗಳಿಗಾಗಿ ಎಸ್​​ಸಿ ಹಾಗೂ ಎಸ್​​ಟಿ ಅನುದಾನವನ್ನು ಗಣನೀಯ ಪ್ರಮಾಣದಲ್ಲಿ ಬಳಕೆ ಮಾಡುತ್ತಿದೆ. ನವೆಂಬರ್​​ವರೆಗೆ ಎಸ್​​ಸಿ/ಎಸ್​​ಟಿ ಅನುದಾನದಿಂದ ಬರೋಬ್ಬರಿ 6,542 ಕೋಟಿ ರೂ. ಹಣ ಬಳಕೆ ಮಾಡಲಾಗಿದೆ.
ಬೃಹತ್ ಪ್ರಮಾಣದ ಹೊರೆಯೊಂದಿಗೆ ಗ್ಯಾರಂಟಿಗಳಿಗಾಗಿ ಫಲಾನುಭವಿಗಳಿಗೆ ಹಣ ಸಂದಾಯ ಮಾಡುತ್ತಿದೆ. ಅದರಲ್ಲೂ ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ಡಿಬಿಟಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ಪಾವತಿ ಎರಡು ಮೂರು ತಿಂಗಳು ವಿಳಂಬವಾಗುತ್ತಿದೆ. ಅನುದಾನ ಹೊಂದಾಣಿಕೆ ಮಾಡಿ ಫಲಾನುಭವಿಗಳಿಗೆ ಹಣ ಪಾವತಿ ಮಾಡಲಾಗುತ್ತಿದೆ. ವಿಪಕ್ಷಗಳ ವಿರೋಧದ ಮಧ್ಯೆಯೂ ಎಸ್​​ಸಿ/ಎಸ್​​ಟಿ ಸಮುದಾಯಕ್ಕೆ ಮೀಸಲಿಟ್ಟಿರುವ ಎಸ್​​ಸಿಎಸ್​​ಪಿ ಹಾಗೂ ​​ಟಿಎಸ್​ಪಿ ಅನುದಾನದಿಂದ ಹಣ ಬಳಕೆ ಮಾಡುತ್ತಿದೆ.
2024-25ರ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸರ್ಕಾರ ನವೆಂಬರ್​​ವರೆಗೆ ಎಸ್​​ಸಿ/ಎಸ್​​ಟಿ ಅನುದಾನದಿಂದ ಬರೋಬ್ಬರಿ 6,542 ಕೋಟಿ ರೂ. ಬಳಸಿದೆ. ಕೆಡಿಪಿ ಮಾಸಿಕ ಪ್ರಗತಿ ಅಂಕಿ – ಅಂಶಗಳ ವಿವರವಿದು ಪಂಚ ಗ್ಯಾರಂಟಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಈ ಬಾರಿ ದೊಡ್ಡ ಪ್ರಮಾಣದ ಅನುದಾನ ಮೀಸಲಿಟ್ಟಿದೆ. 2024-25ರ ಸಾಲಿನಲ್ಲಿ ಈ ಯೋಜನೆಗಳಿಗಾಗಿ ಸುಮಾರು 52,000 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಇದು ವರ್ಷಾಂತ್ಯಕ್ಕೆ ಸುಮಾರು 56,000 ಕೋಟಿ ರೂ. ತಲುಪುವ ಸಾಧ್ಯತೆ ಇದೆ. ಸುಮಾರು ಶೇ 98ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಎಸ್​​ಸಿಎಸ್​​ಪಿ ಯೋಜನೆಯಡಿ ಒಟ್ಟು 9,980 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಈವರೆಗೆ ಒಟ್ಟು 4,650 ಕೋಟಿ ರೂ. ಹಣ ಬಳಕೆ ಮಾಡಲಾಗಿದೆ. ಇನ್ನು ಟಿಎಸ್​ಪಿಯಡಿ ಗ್ಯಾರಂಟಿಗಳಿಗಾಗಿ 4,300 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ನವೆಂಬರ್​​ವರೆಗೆ ಸುಮಾರು 1,891 ಕೋಟಿ ರೂ. ಹಣ ಬಳಕೆ ಮಾಡಲಾಗಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ನವೆಂಬರ್​​ವರೆಗೆ ಎಸ್​​ಸಿಎಸ್​​ಪಿ – ​​ಟಿಎಸ್​ಪಿ ಅಡಿ ಗ್ಯಾರಂಟಿಗಳಿಗಾಗಿ ಹಂಚಿಕೆ ಮಾಡಲಾದ ಒಟ್ಟು ಮೊತ್ತದಲ್ಲಿ 46% ಹಣ ಬಳಸಿದೆ.
ಕೆಡಿಪಿ ಮಾಸಿಕ ಪ್ರಗತಿ ಅಂಕಿ – ಅಂಶಗಳ ಪ್ರಕಾರ, ರಾಜ್ಯ ಸರ್ಕಾರ ಈವರೆಗೆ ಎಸ್​​ಸಿ/ಎಸ್​​ಟಿ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನದಿಂದ ಸುಮಾರು 6,542 ಕೋಟಿ ಹಣ ಬಳಕೆ ಮಾಡಿದೆ. ಎಸ್​​ಸಿಎಸ್​​ಪಿ – ​​ಟಿಎಸ್​ಪಿಯಿಂದ 2024-25ರ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಬರೋಬ್ಬರಿ 14,280 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಈ ಪೈಕಿ ನವೆಂಬರ್​​ವರೆಗೆ ಕಾಂಗ್ರೆಸ್ ಸರ್ಕಾರ 6,542 ಕೋಟಿ ರೂ. ಹಣ ಖರ್ಚು ಮಾಡಿದೆ.
ಎಸ್​​ಸಿ ಹಣ
ಗೃಹ ಜ್ಯೋತಿಗೆ ಒಟ್ಟು ಹಂಚಿಕೆ 1,770 ಕೋಟಿ ರೂ.; ಬಿಡುಗಡೆ 1,092 ಕೋಟಿ ರೂ.; ವೆಚ್ಚ 1,092 ಕೋಟಿ ರೂ.
ಅನ್ನಭಾಗ್ಯಕ್ಕೆ ಒಟ್ಟು ಹಂಚಿಕೆ 1,539 ಕೋಟಿ ರೂ.; ಬಿಡುಗಡೆ 561 ಕೋಟಿ ರೂ.; ವೆಚ್ಚ 550 ಕೋಟಿ ರೂ.
ಶಕ್ತಿ ಯೋಜನೆಗೆ ಒಟ್ಟು ಹಂಚಿಕೆ 1,001 ಕೋಟಿ ರೂ.; ಬಿಡುಗಡೆ 667 ಕೋಟಿ ರೂ.; ವೆಚ್ಚ 667 ಕೋಟಿ ರೂ.
ಯುವನಿಧಿಗೆ ಒಟ್ಟು ಹಂಚಿಕೆ 123.50 ಕೋಟಿ ರೂ.; ಬಿಡುಗಡೆ 30.88 ಕೋಟಿ ರೂ.; ವೆಚ್ಚ 14.40 ಕೋಟಿ ರೂ.
ಗೃಹಲಕ್ಷ್ಮಿಗೆ ಒಟ್ಟು ಹಂಚಿಕೆ 5,546.53 ಕೋಟಿ ರೂ.; ಬಿಡುಗಡೆ 2,363 ಕೋಟಿ ರೂ.; ವೆಚ್ಚ 2,327 ಕೋಟಿ ರೂ.
ಎಸ್​ಟಿ ಹಣ
ಗೃಹ ಜ್ಯೋತಿಗೆ ಒಟ್ಟು ಹಂಚಿಕೆ 815 ಕೋಟಿ ರೂ.; ಬಿಡುಗಡೆ 497.85 ಕೋಟಿ ರೂ.; ವೆಚ್ಚ 497.85 ಕೋಟಿ ರೂ.
ಶಕ್ತಿ ಯೋಜನೆಗೆ ಒಟ್ಟು ಹಂಚಿಕೆ 450.45 ಕೋಟಿ ರೂ.; ಬಿಡುಗಡೆ 300 ಕೋಟಿ ರೂ.; ವೆಚ್ಚ 300 ಕೋಟಿ ರೂ.
ಗೃಹ ಲಕ್ಷ್ಮಿಗೆ ಒಟ್ಟು ಹಂಚಿಕೆ 2,335 ಕೋಟಿ ರೂ.; ಬಿಡುಗಡೆ 863.61 ಕೋಟಿ ರೂ.; ವೆಚ್ಚ 863 ಕೋಟಿ ರೂ.
ಅನ್ನಭಾಗ್ಯಕ್ಕೆ ಒಟ್ಟು ಹಂಚಿಕೆ 648 ಕೋಟಿ ರೂ.; ಬಿಡುಗಡೆ 237.76 ಕೋಟಿ ರೂ.; ವೆಚ್ಚ 231 ಕೋಟಿ ರೂ.
ಯುವನಿಧಿಗೆ ಒಟ್ಟು ಹಂಚಿಕೆ 52 ಕೋಟಿ ರೂ.; ಬಿಡುಗಡೆ 0; ವೆಚ್ಚ 0

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

205 INDIANS DEPORTED BY US:ಅಕ್ರಮವಾಗಿ ಅಮೆರಿಕದಲ್ಲಿದ್ದ ಭಾರತೀಯರ ಗಡಿಪಾರು

Amritsar News: ಅಕ್ರಮ ವಲಸಿಗರ ವಿರುದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕಠಿಣಕ್ರಮ ಕೈಗೊಂಡಿದ್ದಾರೆ. ಅದರಂತೆ ದಾಖಲೆ ರಹಿತವಾಗಿ ಅಮೆರಿಕದಲ್ಲಿ ನೆಲೆನಿಂತಿದ್ದ INDIANSನ್ನು ಮರಳಿ ತವರಿಗೆ...

DONALD TRUMP ORDERS:ಮಾನವ ಹಕ್ಕುಗಳ ಮಂಡಳಿಯಿಂದ ಅಮೆರಿಕ ಹೊರಕ್ಕೆ ಟ್ರಂಪ್ ಆದೇಶ

Washington DC (USA) News: ಅಮೆರಿಕವನ್ನು ಡಬ್ಲ್ಯೂಎಚ್​​ಒದಿಂದ ಹೊರತಂದಿದ್ದ TRUMP ಇದೀಗ, ವಿಶ್ವವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದಲೂ ಹಿಂತೆಗೆದುಕೊಂಡಿದ್ದಾರೆ.ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಹೊರಕ್ಕೆ, ಪ್ಯಾಲೆಸ್ಟೈನ್​...

PREGNANCY AGE TIPS:ವಯಸ್ಸು 36, ಈಗ ಎರಡನೇ ಮಗುವಿಗೆ ಪ್ರಯತ್ನಿಸಬಹುದೇ?

Confused About Having Second Child News: ಅವಿಭಕ್ತ ಕುಟುಂಬದಲ್ಲಿ ಮನೆಯವರೆಲ್ಲ ಸೇರಿ ಮಕ್ಕಳಿಗೆ ಆಟ, ಪಾಠದ ನಡುವೆ ಜೀವನದ ಪಾಠವನ್ನು ಕಲಿಸುತ್ತಿದ್ದರು. ಆದರೆ ಕಾಲ...

VIRAT KOHLI RANJI TROPHY:ವಿರಾಟ್ ಕೊಹ್ಲಿ ಔಟ್ ಮಾಡುವುದರ ಹಿಂದೆ ಬಸ್ ಚಾಲಕನ ಮಾಸ್ಟರ್ ಪ್ಲಾನ್.

New Delhi News: ಇದರೊಂದಿಗೆ ಕೇವಲ 6 ರನ್​ಗಳಿಗೆ ಪೆವಿಲಿಯನ್​ ಸೇರಿಕೊಂಡಿದ್ದರು. ಕೊಹ್ಲಿ ವಿಕೆಟ್​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ...