spot_img
spot_img

ಆನೆ ಬಳಕೆಗೆ ಕೋರ್ಟ್ ನಿರ್ಬಂಧ : ಕೇರಳ ಸಚಿವ ಆದೇಶ

spot_img
spot_img

Share post:

ಕೊಚ್ಚಿ: ದೇವಾಲಯಗಳ ಉತ್ಸವಗಳಲ್ಲಿ ಆನೆಗಳ ಬಳಕೆಯ ವಿಷಯದಲ್ಲಿ ಕೇರಳ ಹೈಕೋರ್ಟ್​ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಸಚಿವರು ಈ ಹೇಳಿಕೆ ನೀಡಿದ್ದಾರೆ.

ದೇವಾಲಯದ ಉತ್ಸವಗಳಲ್ಲಿ ಆನೆಗಳ ಬಳಕೆಯ ವಿಚಾರದಲ್ಲಿ ಕೇರಳ ಹೈಕೋರ್ಟ್ ನ ಮಾರ್ಗಸೂಚಿಗಳನ್ನು ಪಾಲಿಸಿದ್ದೇ ಆದಲ್ಲಿ ದೇವಾಲಯಗಳಲ್ಲಿನ ಉತ್ಸವಗಳನ್ನು ಈ ಹಿಂದಿನಂತೆ ಆಚರಿಸಿಕೊಂಡು ಹೋಗಬಾರದು ಎಂದಿದ್ದಾರೆ.

ಕೇರಳದಲ್ಲಿ ಸೆರೆಹಿಡಿದ ಆನೆಗಳನ್ನು ದೇವಾಲಯಗಳು ಮತ್ತು ಉತ್ಸವಗಳಲ್ಲಿ ಪ್ರದರ್ಶಿಸುವ ಮೂಲಕ ಅವುಗಳ ಮೇಲೆ ಎಸಗಲಾಗುತ್ತಿರುವ ಕ್ರೌರ್ಯವನ್ನು ತಡೆಗಟ್ಟುವಂತೆ ಕೋರಿ ಸಲ್ಲಿಸಲಾಗಿದ್ದ ರಿಟ್​ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್​, ದೇವಾಲಯಗಳ ಉತ್ಸವಗಳಲ್ಲಿ ಆನೆಗಳನ್ನು ಬಳಸಲು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಗುರುವಾರ ತಡರಾತ್ರಿ ತೀರ್ಪು ನೀಡಿದೆ.

“ಹಬ್ಬಗಳಲ್ಲಿ ಆನೆಗಳನ್ನು ಕಡ್ಡಾಯವಾಗಿ ಬಳಸಲೇಬೇಕೆಂದು ಯಾವುದೇ ಧರ್ಮದಲ್ಲಿ ಯಾವುದೇ ಅಗತ್ಯ ಧಾರ್ಮಿಕ ಆಚರಣೆ ಇದೆ ಎಂಬುದನ್ನು ನಾವು ಒಪ್ಪುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ವಿಷಯದಲ್ಲಿ ಪ್ರಾಣಿಯನ್ನು ವ್ಯಾಪಾರದ ಸರಕಾಗಿ ನೋಡಲಾಗುತ್ತಿದೆ.

ಆನೆಯ ಮಾಲೀಕರು ಅಥವಾ ರಕ್ಷಕರು ಆನೆಯಿಂದ ತಮಗೆ ಬರಬಹುದಾದ ವಾಣಿಜ್ಯ ಆದಾಯದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ.

ಕೇರಳದ ಉತ್ಸವಗಳು ಈಗ ಎಷ್ಟು ವಾಣಿಜ್ಯೀಕರಣಗೊಂಡಿವೆಯೆಂದರೆ, ಹಬ್ಬಕ್ಕೆ ಮುಂಚಿತವಾಗಿಯೇ, ಮೆರವಣಿಗೆ ಮಾಡುವ ಆನೆಗಳ ಸಂಖ್ಯೆ ಮತ್ತು ಮೆರವಣಿಗೆ ಮಾಡುವ ನಿರ್ದಿಷ್ಟ ಆನೆಗಳು / ಆನೆಗಳ ಖ್ಯಾತಿಯ ಬಗ್ಗೆ ಉತ್ಸವಗಳನ್ನು ನಡೆಸುವ ದೇವಾಲಯ ಸಮಿತಿಗಳ ನಡುವೆ ಪೈಪೋಟಿ ಅಥವಾ ಒಂದು ರೀತಿಯ ಸ್ಪರ್ಧೆ ಇದೆ.”

2018-2024 ರ ನಡುವೆ, 160 ಸೆರೆಹಿಡಿದ ಆನೆಗಳು ಸಾವನ್ನಪ್ಪಿವೆ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಕೇರಳದಲ್ಲಿ, 2018-2024 ವರ್ಷಗಳಲ್ಲಿ, ದಾಖಲಾದ ಒಟ್ಟು ಸೆರೆಹಿಡಿದ ಆನೆಗಳ ಸಂಖ್ಯೆಯ ಸುಮಾರು 33 ಪ್ರತಿಶತದಷ್ಟು (2018 ರಲ್ಲಿ 509) ಈ ಅಲ್ಪಾವಧಿಯಲ್ಲಿ ಸಾವನ್ನಪ್ಪಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

“ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದರೆ ಈವರೆಗೆ ನಡೆಯುತ್ತಿದ್ದ ದೇವಾಲಯದ ಉತ್ಸವಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗದು. ವಿವಿಧ ದೇವಾಲಯಗಳು ಇದೇ ಮಾತನ್ನು ಹೇಳಿದ್ದು, ಅದು ನಿಜ. ನ್ಯಾಯಾಲಯದ ಹೊಸ ಆದೇಶದ ವಿಚಾರದಲ್ಲಿ ರಾಜ್ಯ ಸರ್ಕಾರ ಮುಂದೇನು ಮಾಡಬಹುದು ಎಂಬುದನ್ನು ಪರಿಶೀಲಿಸಲಾಗುವುದು” ಎಂದು ತ್ರಿಶೂರ್ ಮೂಲದ ರಾಜನ್ ಹೇಳಿದರು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು, ಇನ್ನು ಮುಂದೆ, ಉತ್ಸವದ ಸಂಘಟಕರು ಉತ್ಸವಕ್ಕೆ ಕನಿಷ್ಠ ಒಂದು ತಿಂಗಳ ಮೊದಲು ಸಂಬಂಧಪಟ್ಟ ಅಧಿಕಾರಿಗಳಿಗೆ ಎಲ್ಲಾ ಸಂಬಂಧಿತ ವಿವರಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಆದೇಶ ಹೊರಡಿಸಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...