spot_img
spot_img

ಪ್ರಾಣದ ಹಂಗು ತೊರೆದು ಅಜ್ಜಿ ಜೀವ ಉಳಿಸಲು ನದಿಗೆ ಜಿಗಿದ KSRTC ಡ್ರೈವರ್; ಕೊನೆಗೆ ಏನಾಯ್ತು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹಾವೇರಿ: ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದೆ. ಒಂದು ಕಡೆ ಕರ್ತವ್ಯ ಮತ್ತೊಂದು ಕಡೆ ಮಾನವೀಯತೆ, ಎರಡು ಒಂದೇ ಸಂದರ್ಭದಲ್ಲಿ ಎದುರಾದಾಗ ಹಾವೇರಿಯ ಬಸ್​ ಚಾಲಕನೊಬ್ಬ ಮೊದಲು ಆಯ್ಕೆ ಮಾಡಿಕೊಂಡಿದ್ದು ಮಾನವೀಯತೆಯನ್ನ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಅಜ್ಜಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ತುಂಬಿ ಹರಿಯುತ್ತಿರುವ ಕುಮದ್ವತಿ ನದಿಗೆ ಹಾರಿದ್ದಾರೆ. ಅದೇ ವೇಳೆ ಮಜೀದಸಾಬ್ ಎಂಬ ಕೆಎಸ್​ಆರ್​​ಟಿಸಿ ಡ್ರೈವರ್​ ರಟ್ಟಿಹಳ್ಳಿಯಿಂದ ಹಿರೇಕೆರೂರಿಗೆ ಬಸ್ ಓಡಿಸಿಕೊಂಡು ಹೋಗುತ್ತಿದ್ದರು, ಅಜ್ಜಿ ನದಿಗೆ ಜಿಗಿದಿದ್ದನ್ನು ಗಮನಿಸಿದ ಮಜೀದ್​ ಸಾಬ್​ ಹಿಂದೆ ಮುಂದೆ ನೋಡದೆ ಅಲ್ಲಿಯೇ ಬಸ್​ ನಿಲ್ಲಿಸಿ. ಉಕ್ಕಿ ಹರಿಯುತ್ತಿದ್ದ ನದಿಗೆ ಜೀವದ ಹಂಗು ತೊರೆದು ಜಿಗಿದಿದ್ದಾರೆ. ಈಜಿಕೊಂಡು ಹೋಗಿ ಅಜ್ಜಿಯ ದೇಹವನ್ನು ನದಿಯ ದಂಡೆಗೆ ಎಳೆದುಕೊಂಡು ಬಂದಿದ್ದಾರೆ. ಆದ್ರೆ ವಿಪರ್ಯಾಸ ನೋಡಿ ಕಾಲನ ಮುಂದೆ ಯಾವ ಮಜೀದ್​​ಸಾಬ್​ ಅವರ ಮಾನವೀಯತೆಯ ಪ್ರತಿನಿಧಿಸುವ ಆ ಪ್ರಯತ್ನ ವಿಫಲವಾಗಿದೆ. ಅಜ್ಜಿಯನ್ನು ಕಾಪಾಡಲು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಆಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಇನ್ನೂ ಜೀವದ ಹಂಗು ತೊರೆದು ಅಜ್ಜಿಯನ್ನು ಕಾಪಾಡಲು ನದಿಗೆ ಹಾರಿದ ಡ್ರೈವರ್ ಮಜೀದಸಾಬ್ ಗುಬ್ಬಿಯವರ ಪ್ರಯತ್ನಕ್ಕೆ ಜನರು ಹಾಗೂ ಪ್ರಯಾಣಿಕರು ಭೇಷ್ ಎಂದಿದ್ದಾರೆ. ಹಾಡಿ ಹೊಗಳಿದ್ದಾರೆ. ಮಜೀದಸಾಬ್​ ನದಿಗೆ ಜಿಗಿದಾಗ ಅವರ ಅಜ್ಜಿಯನ್ನುಳಿಸುವ ಪ್ರಯತ್ನಕ್ಕೆ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಆದ್ರೆ ಯಮನಿಗೆ ಗಡುವು ಕರುಣೆ ಅನ್ನೋದೆಲ್ಲಿದೆ. ಇವರೆಲ್ಲರ ಆ ಪ್ರಯತ್ನವೂ ಕೈಗೂಡದೇ ಹೋಗಿದೆ. ಅಜ್ಜಿ ಕೊನೆಗೂ ಸಾವನ್ನಪ್ಪಿದ್ದಾರೆ. ಆದ್ರೆ ಮಜೀದಸಾಬ್ ಅವರ ಮೆರೆದ ಮಾನವೀಯತೆಗೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಆತ್ಮಹತ್ಯೆಗೆ ಮುಂದಾದ ವೃದ್ಧೆ ಯಾರು ಏನು ಎಂಬುದು ಸ್ಪಷ್ಟವಾಗಿಲ್ಲ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲೆಗೊಂಡಿದ್ದು, ಅಜ್ಜಿಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

Big shock for Samantha fans:ಗುರುತು ಸಿಗದ ಹಾಗೆ ದಿಢೀರ್ ಬದಲಾಗಿ ಬಿಟ್ಟ ಸ್ಯಾಮ್!

Samantha News: ಟಾಲಿವುಡ್​ ಸ್ಟಾರ್​ ನಟಿ Samantha ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದುಕೊಂಡಿದ್ದ Samantha ಇತ್ತೀಚೆಗೆ...

A bold decision in Tirupati after the Laddu dispute: ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ

Transfer or Retirement Fix! News ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. Laddu ವಿವಾದದ ಬಳಿಕ ತಿರುಮಲ ತಿರುಪತಿ...

SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!

Spider-Man Suits News: ಇವರು ಧರಿಸಿಕೊಂಡಿರುವ SUITS ಫುಲ್​ ಸ್ಟ್ರಾಂಗ್​ ಆಗಿರುತ್ತದೆ. ಬುಲೆಟ್​ ಸೇರಿದಂತೆ ಅನೇಕ ಆಯುಧಗಳಿಂದ ದಾಳಿ ಮಾಡಿದ್ರೂ ಸಹ ಆ SUITS​ನಿಂದ ಅವರು...

HUSBAND KILLS WIFE:ಅಮ್ಮನ ಮೃತದೇಹದ ಬಳಿ ಕಂದಮ್ಮನ ಆಕ್ರಂದನ

Belgaum News: ಮೀರಾಬಾಯಿ (25) ಎಂಬವರೇ KILLSಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು...